ಪುಟಗಳು

ಸೋಮವಾರ, ಫೆಬ್ರವರಿ 13, 2023

ಅಯೋಧ್ಯೆಯ ಮಾದರೀಯ ಪುಟ್ಟ ಮಂದಿರ

 ನೋಡ ಬನ್ನಿ ರಾಮ ಮಂದಿರ

ಯೋಧ್ಯೆಯ ಮಾದರೀಯ ಪುಟ್ಟ ಮಂದಿರ

ಪಕ್ಕದಲ್ಲಿ  ರಾಮ ಚಂದಿರ

ನೋಡಲಂತೂ ಎಷ್ಟು ಸುಂದರ ||

 

ಶಿಖರದಲ್ಲಿ ಪುಟ್ಟ ಲಾಂಛನ

ಮಂದಿರಕ್ಕೆ ಕೇಸರೀಯ ಬಣ್ಣ ಲೇಪನ

ದ್ವಾರದೊಳಗೆ ನೋಡಿ ರಾಮನ

ಸೀತ ಲಕ್ಷ್ಮಣ ಹನುಮ ಸಹಿತನ     ||  ||    

ನೋಡ ಬನ್ನಿ ರಾಮ ಮಂದಿರ.. …..ಎಷ್ಟು ಸುಂದರ ||


ಹಗಲಿನಲ್ಲಿ ಸೂರ್ಯ ನಾರತಿ

ಮಂದಿರಕ್ಕೆ ಸಂಜೆಯಲ್ಲಿ ದೀಪದಾರತಿ

ಹಾಡುಭಜನೆ ನಮ್ಮ ಸಂಸ್ಕೃತಿ

ಇದುವೆ ರಾಮಗೆ ಮಂಗಳಾರತಿ   || ||    

ನೋಡ ಬನ್ನಿ ರಾಮ ಮಂದಿರ.. …..ಎಷ್ಟು ಸುಂದರ ||

 

ಸುತ್ತಿ ಬಂದು ಕೈಯ ಮುಗಿಯುತ

ರಾಮ ರಾಮ ರಾಮ ಎನ್ನುತ

ಕೈಯ ತಟ್ಟಿ ಭಜನೆ ಮಾಡುತ

ರಾಮದೇವರ ಹಾಡು ಹಾಡುತ  || ||    

ನೋಡ ಬನ್ನಿ ರಾಮ ಮಂದಿರ.. …..ಎಷ್ಟು ಸುಂದರ ||

ನಾನು ಮೋಸಹೋಗಿದ್ದು

 

ನಾನು ಮೋಸಹೋಗಿದ್ದು



ನಾನು ಆನೇಕಸಲ ಮೋಸಹೋಗಿದ್ದೀನಿ. ಎಷ್ಟೋಸಲ ನನಗೆ "ನಾನು ಇರುವುದೇ ಜನರಿಂದ ಮೋಸಹೋಗೋದಕ್ಕೆ" ಅನ್ನಿಸಿದೆ.ಇಂತಹ ಸನ್ನಿವೇಶಗಳನ್ನು  ಹಾಸ್ಯಮಯವಾಗಿ ನಿಮ್ಮಮುಂದೆ ಇಡಲು ಇಚ್ಚಿಸುತ್ತೇನೆ.
ನನ್ನ ತಲೆಗೆ ಯಾವುದೇ ಅಳತೆಯ, ಯಾವುದೇ ತರಹದ  ಟೋಪಿ ಹಾಕಬಹುದೆನಿಸುತ್ತದೆ. ನನ್ನ ತಲೆಯನ್ನು ನೋಡಿದ ಅನೇಕರಿಗೆ ಟೋಪಿಹಕಬೆಕೆನ್ನಿಸುತ್ತದೆಯೋ ಏನೋ!

ಇಲ್ಲಿ, ನಾನು ಅಥವಾ ನನ್ನ ಮನೆಯವರು ಬೇಸ್ತುಬಿದ್ದ ಪ್ರಸಂಗಗಳನ್ನು ವಿವರಿಸಿದ್ದೇನೆ.

ಬಾಚಣಿಗೆಯಿಂದ ......ಟೋಪಿ 

ಬಾಚಣಿಗೆ ಬೇಕೆ ಬಾಚಣಿಗೆ ಎಂದು ಮಾರುವವರು ಬಂದಾಗ ಬಾಗಿಲು ತೆರೆದಿದ್ದು ನಮ್ಮಮ್ಮ.ನಮಗೆ ಕಂಡದ್ದು , ಗಂಡ-ಹೆಂಡತಿ , ಗಾಡಿಯಲ್ಲಿ ಬಾಚಣಿಗೆ ಮಾರುತ್ತಿದ್ದದ್ದು. ಬಾಚಣಿಗೆ ನೋಡುತ್ತಿದ್ದ ನಮ್ಮಮ್ಮನ ಕೈ ನಲ್ಲಿ ಇದ್ದ ಮೊಡವೆ ಯಂಥಹ  ಒಂದು ಸಾಧಾರಣ ಗುಳ್ಳೆಯನ್ನು  ನೋಡಿದ ಆಕೆ, "ಅಯ್ಯೋ! ಇದನ್ನು ಏಕೆ ಹೀಗೆಬಿಟ್ಟಿದ್ದೀರಿ. ಇದು ಮೈಎಲ್ಲ ಹರಡುತ್ತದೆ. ಇದಕ್ಕೆ ನಮಗೆ ಔಷದ ಗೊತ್ತು. ಮಾಡುವುದು ಬಹಳ ಸುಲಭ. ನಾವೇ ಮಾಡಿಕೊಡುತ್ತೇವೆ" ಎಂದಳು.
ಇದಕ್ಕೆ ಏನೇನು ಬೇಕು? ಎಂದು ನಮ್ಮಮ್ಮ ಕೇಳಿದ್ದಕ್ಕೆ, "ಎಲ್ಲವಸ್ತುಗಳು ನಿಮ್ಮ ಅಡುಗೆಮನೆಯಲ್ಲಿಯೇ ಇವೆ , 1ಲೀಟರ್ ಕೊಬ್ಬರಿ ಎಣ್ಣೆ ,ಸ್ವಲ್ಪ ಕರ್ಪೂರ,ಏಲಕ್ಕಿ.....,ಇದನ್ನು ಚೆನ್ನಾಗಿ ಕಾಯಿಸಲು ಚಿಕ್ಕ ಗ್ಯಾಸ್ ಒಲೆ ಸಾಕು  " ಎಂದಳು.


ಎಲ್ಲವನ್ನೂ ಕೊಟ್ಟು, ಅವರು ಏನುಮಾಡುತ್ತಾರೆಂದು ನಾವೆಲ್ಲ ನೋಡುತ್ತಾ ಕುಳಿತೆವು. ಒಲೆಯಮೇಲೆ ಎಲ್ಲವನ್ನು ಹಾಕಿ,ಕಾಯಿಸಲು ಶುರುಮಾಡಿದರು.


ನಂತರ, ಗಂಡ ಹೇಳಿದ"ಇಷ್ಟೆಲ್ಲಾ ಮಾಡಿದ್ದೀರಿ,ಇದಕ್ಕೆ, ಸ್ವಲ್ಪ ಅಡಿಗೆ ಅರಿಶಿನ,1ಕೆ‌ಜಿ ಪಚ್ಚಕರ್ಪೂರ,..... ಇವೆಲ್ಲಾ ಗ್ರಂದಿಗೆ ಅಂಗಡಿಯಲ್ಲಿ ಸಿಗುತ್ತದೆ ಬೇಗ ತೆಗೆದುಕೊಂಡುಬನ್ನಿ.ಇದನ್ನು ಹಾಕಿದರೆ ಇನ್ನೂ ಅನೇಕ ರೀತಿಯಲ್ಲಿ  ಚರ್ಮದ ಆರೋಗ್ಯ ಕಾಪಾಡುತ್ತದೆ" ಎಂದನು.

ಈಗ ಅವನುಕೊಟ್ಟ ಸ್ಲಿಪ್ ಹಿಡಿದು  ಅಂಗಡಿಗೆ ಓಡುವ ಸರದಿ ನನ್ನದಾಯಿತು. ಎಲ್ಲವನ್ನೂ ತಂದು ಲೆಕ್ಕ ಹಾಕಿದಾಗ, ಸರಿಯಾಗಿ 1000 ರೂಪಾಯಿ ಆಗಿತ್ತು!



ಮತ್ತೆ ಎಲ್ಲವನ್ನೂ ಹಾಕಿ, ಅದನ್ನು ದೊಡ್ಡಪತ್ರೆಗೆ ಹಾಕಿ ಕಾಯಿಸತೊಡಗಿದರು.ನಂತರ ಎಲ್ಲವನ್ನೂ ಕಲಕಿ "ನಡಿಯಿರಿ , ಹೋಗೋಣ" ಎಂದಾಗ ನಾವು "ಎಲ್ಲಿಗೆ?" ಎಂದೆವು. "ನಮ್ಮವರ ಗುರುತಿನ ಅಂಗಡಿಯಲ್ಲಿ ಇದಕ್ಕೆ ಸ್ವಲ್ಪ ಚೂರ್ಣ ಹಾಹಿಸಬೇಕು" ಎಂದನು. ಅಂಗಡಿ ವಿಳಾಸ ಕೊಡಿ, ನಾವು ನಾಳೆ ಹಾಕಿಸುತ್ತೇವೆ, ಎಂದೆವು. ಇಲ್ಲ,ಇದು ಆರುವುದರಲ್ಲಿ ಹಾಕಿಸದಿದ್ದರೆ ಎಲ್ಲ ವ್ಯರ್ಥ ಎಂದನು.

ಸರಿ, ನಡೆಯಿರಿ ಯೆಂದು ನಾನು,ನನ್ನ, ತಂದೆಯವರು, ಅವನನ್ನು ಕರೆದುಕೊಂಡು, ಅದನ್ನು ಸರಿಯಾದ ಪಾತ್ರೆಗೆ ಹಾಕಿ, ಅದನ್ನು ತೆಗೆದುಕೊಂಡು ಕಾರಿನಲ್ಲಿ ಹೊರಟೆವು." ಅಂಗಡಿ ಬಹಳ ದೂರ ಬೇಗ ನಡೆಯಿರಿ, ಇದು ಆರಿಹೋಗುತ್ತದೆ" ಎಂದು ದುಂಬಾಲು ಬಿದ್ದನು.

ಕೊನೆಗೂ ಅಂಗಡಿ ತಲುಪಿದೆವು.ಅಲ್ಲಿ ಇವನಿಗೆ ಪರಿಚಯವಿದ್ದಂತೆ ಇರುವವನೊಡನೆ," ಚೂರ್ಣ ಗಳನ್ನು ಹಾಕು" ಎಂದನು.
ಅಂಗಡುಯವನು ," ಇದು ವಜ್ರ ದ ಪುಡಿ, ಇದು ಮುತ್ತಿನಪುಡಿ .........ಇದು ಚಿನ್ನದಪುಡಿ"  ಎಂದು ಅಂಗಡಿಯವನು ಖುಷಿಯಾಗಿ ಒಂದೊಂದೇ ಹಾಕುತ್ತಾ ಹೋದಾಗ ನಮಗೆ ಘಾಬರಿಯಾಗಿ, ಎಷ್ಟಾಗುವುದೊ ಏನೋ ಅನ್ನಿಸತೊಡಗಿತು." ಸಾಕು" ಎಂದೆವು.
ಇನ್ನೂ ಹಾಕಿದರೆ ನಾವು ದುಡ್ಡುಕೊಡಲಾರೆವೆಂಬುದು ತಿಳಿದಮೇಲೆ,ನಿಲ್ಲಿಸಿದನು.ಆಮೇಲೆ, ಬಾಚನಿಗೆಯವನು, ಅಂಗಡಿಯವನಿಗೆ ದುದ್ದುಕೊಡಲು ಹೇಳಿದನು. ಅಂಗಡಿಯವನು ಕೊಟ್ಟ ಬಿಲ್ ನೋಡಿ ನಾನು, ನನ್ನ ತಂದೆ ಬೆರಗಾದೆವು.
ಸರಿಸುಮಾರು 7000 ರೋಪಾಯಿಗಳು. ಅಷ್ಟು ದುಡ್ಡು ನಮ್ಮಹತ್ತಿರ ಯಿಲ್ಲ ಎಂದಾಗ,ಚೆಕ್ ಕೊಡಿ ಪರವಾಗಿಲ್ಲ ಎಂದನು. ನಾವು, ಏನೂಕೊಡುವುದಿಲ್ಲ,ನಮಗೆ ಇದು ಬೇಡ ಎಂದಾಗ," ನಾನು ಅನೇಕ ಚೂರ್ಣಗಳನ್ನು ಇದರಲ್ಲಿ ಹಾಕಿದ್ದೇನೆ,ಅದನ್ನು ವಾಪಸ್ಸು ಕೊಡಿ ಇಲ್ಲದಿದ್ದರೆ ಗಲಾಟೆ  ಮಾಡುತ್ತೇನೆ" ಎಂದನು. ವಿಧಿಯಿಲ್ಲದೆ ಚೆಕ್ ನೀಡಿದೆವು.


ಅಷ್ಟುಹೊತ್ತಿಗೆ,ಬಾಚಣಿಗೆಯವನು  ನಾಪತ್ತೆಯಾಗಿದ್ದನು. ಇತ್ತ,ಮನೆಯಬಳಿ, ಅವನ  ಹೆಂಡತಿಯೂ, ಗಾಡಿಯೂ ಇರಲ್ಲಿಲ್ಲ.
ಇಷ್ಟಾದಮೇಲೆ  ನಮಗೆ ಮೋಸದ ಅರಿವಾಯಿತು.
ಹೋಗಲಿ, ಎಣ್ಣೆಯನ್ನಾದರೂ ಬಲಸೋಣ ಎಂದು ಕೆಲವುದಿನ ಉಪಯೋಗಿಸಿದೆವು.ಅದರಿಂದ ವಾಸಿಯಾಗುವಡಿರಲಿ,ಇನ್ನೆನಾದರು ಆಗುವದೆನಿಸಿತು. ಮೊದಮೊದಲು ಕರ್ಪೂರದವಾಸನೆ ಬರುತ್ತಿತ್ತು.ಕೆಲವು ದಿನಗಳನಂತರ ,ಗಬ್ಬು ವಾಸನೆ ಬಂದಿತು. ಅದನ್ನು ದೂರದ ತಿಪ್ಪೆಗೆ ಚೆಲ್ಲಿ ಬಂದೆವು.


ಹುಲ್ಲಿಲ್ಲದೆ  ಹುಲ್ಲುಮೇದಿದ್ದು!

ನಮ್ಮ ಮನೆಯ ಮುಂದೆ 15x20 ಅಡಿ ಮಣ್ಣಿನ ಜಾಗದಲ್ಲಿ ಹುಲ್ಲುಹಾಸನ್ನು  ಮಾಡಬೇಕೆಂದು ಆಸೆಯಿತ್ತು.ಅದಕ್ಕಾಗಿ ಯಾರಾದರು ಒಳ್ಳೆಯ ಹಾಗೂ ತಿಳಿದ ಕೆಲಸಗಾರರನ್ನು ಹುಡುಕುತ್ತಿದ್ದೆವು. ಇದನ್ನು ಹೇಗೋ ತಿಳಿದವನೊಬ್ಬ "ನಿಮ್ಮ ಮನೆಯ ಮುಂದಿನ ಜಾಗದಲ್ಲಿ ಹುಲ್ಲುಹಾಕಿಕೊಡಲೇ?" ಎಂದಾಗ, ನಾನು "ಓಹೋ, ಬನ್ನಿ. ನಾನು ನಿಮ್ಮನ್ನೇ ಹುಡುಕುತ್ತಿದ್ದೆ" ಎಂದು , ಕೆಲಸ ಒಪ್ಪಿಸಿದೆ.
 ಇದಕ್ಕೆ ಸ್ವಲ್ಪ ಹಣಬೇಕಾಗುತ್ತದೆ ಎಂದಾಗ, ನಾನೇ ಮುಂದಾಗಿ 500ರೂ ಕೊಟ್ಟೆ.ಅವನಿಗಾಗಲೇ ನಾನು ಪೆದ್ದನೆಂದು ತಿಳಿಯಿತೆಂದು ಕಾಣುತ್ತದೆ. "ನಿಮಗೆ ಭಾರತದ ಹುಲ್ಲು ಸಾಕೇ ಅಥವಾ ಜಪಾನು ,ಜರ್ಮನಿ ...... ಹುಲ್ಲುಬೇಕೆ?, ಅವೆಲ್ಲ ಬಹಳ ದಿನ ಬಾಳಿಕೆ ಬರುತ್ತದೆ" ಎಂದ. ಆಯಿತು ಎಂದೆ.ಹಾಗಾದ್ರೆ  ಇನೂ 1000ರೂ  ಕೊಡಿ ಎಂದಾಗ, ವಿಧಿ ಇಲ್ಲದೆ ಕೊಟ್ಟೆ. ಬೆಳಿಗ್ಗೆ ಅವನ ಕೆಲವು ಸಾಮಗ್ರಿಗಳನ್ನು ನಮ್ಮ ಮನೆಯಲ್ಲಿಯೇ ಬಿಟ್ಟು ಹೋಗಿ (ನಮಗೆ ನಂಬಿಕೆಗಾಗಿ ಅನ್ನಿಸುತ್ತೆ), ಮಧ್ಯಾನದ ಹೊತ್ತಿಗೆ ಬಂದ.

.

ನೆಲವನ್ನು ಅಲ್ಲಲ್ಲಿ ಅಗೆಯುತ್ತಾ, ಸ್ವಲ್ಪ ಹುಲ್ಲಿನಕುಪ್ಪೆಗಳನ್ನು ಇಡುತ್ತಾ,ಚಿತ್ರದಲ್ಲಿರುವಂತೆ ಮಾಡಿದನು. ನಂತರ,ಇದು ಬಹಳಬೇಗ ಬೆಳೆಯುತ್ತದೆ, ಆದರೆ ಇದಕ್ಕೆ,ಈಗಲೇ ಗೊಬ್ಬರ ಹಾಕಬೇಕು. ಇಲ್ಲದಿದ್ದರೆ ಎಲ್ಲ ಒಂದೇ ವಾರದಲ್ಲಿ ಒಣಗಿ ಹೋಗುತ್ತದೆ ಎಂದಾಗ, ನಾನು "ಎಲ್ಲಿಂದ ತರಬೇಕು, ನಾನು ತರುತ್ತೇನೆ" ಎಂದೆ.ಇಲ್ಲ,ನಿಮಗೆ ತಿಳಿಯುವದಿಲ್ಲ!,ನಾನೇ ತಂದಿದ್ದೇನೆ,ಅದಕ್ಕೆ,1000ರೂ ಆಗುತ್ತದೆ ಎಂದ.ಅದನ್ನೂ ಕೊಟ್ಟೆ. ಆಗ ಅವನು ರೈಲುಬಿಡಲು ಶುರು ಮಾಡಿದ. ಈ ಹುಲ್ಲು, ಸಾಮಾನ್ಯದ್ದಲ್ಲ, ಒಂದು ತಿಂಗಳಲ್ಲಿ ಬೆಳೆಯುತ್ತದೆ. ನೀವು ಆಗಾಗ,ಕತ್ತರಿಸದಿದ್ದರೆ,ಅಸಹ್ಯವಾಗುತ್ತದೆ. ಅಂದವಾಗಿಟ್ಟುಕೊಂಡರೆ ಬಂದವರೆಲ್ಲ ಆಶ್ಚರ್ಯ ಪಡುತ್ತಾರೆ ಎಂದ.


ನಾನು,"ಹುಲ್ಲು ವಿಪರೀತ ಬೆಳೆದಂತೆ, ಅದನ್ನುದೊಡ್ಡ ಕತ್ತರಿ ಯಲ್ಲಿ ಕತ್ತರಿಸಲಾಗದೆ,ಲಾನ್ ರೋಲರ್ ನಲ್ಲಿ ಕತ್ತರಿಸುತ್ತಿರುವಂತೆ"  ಹಗಲುಗನಸು  ಕಂಡೆ.(ಚಿತ್ರ ನೋಡಿ)
ನಂತರ,ಕೂಲಿ 1000ರೂ ಕೇಳಿದ. ಒಟ್ಟು,2500ರೂ ಆದರೂ,  ಹೂದರೆ ಹೋಗಲಿ ಹುಲ್ಲುಬೇಕಲ್ಲ ಅಂದುಕೊಡೆ.
ಅವನು ತರದೆ ಇದ್ದ , ನಮ್ಮ ಕೆಲವು ಗುದ್ದಲಿ,ಮುಂತಾದವನ್ನು, ಕೇಳಿದ.ಇಲ್ಲೇ ಮುಂದಿನಬೀದಿಯಲ್ಲಿ .....(ನಮಗೆ ಪರಿಚಯವಿದ್ದವರ ಹೆಸರು ಹೇಳಿ) ಅವರೂ ಹೀಗೆಯೇ ಮಾಡಿಸಿತ್ತಾರಂತೆ . ಸಂಜೆ ತಂದುಕೊಡುತ್ತೇನೆ ಎಂದ. ಅದನ್ನು ಕೊಟ್ಟು ಕಳಿಸಿ,ಸ್ವಲ್ಪಸಮಯದ ನಂತರ ಅವರಿಗೆ ಫೋನ್ ಮಾಡಿದಾಗ,ಅವರು, "ನಮ್ಮನ್ನೂ ಹುಲ್ಲು ಹಾಕಬೇಕೆ ಎಂದು ಕೇಳಿದ್ದ, ನಾವು ಈಗ ಬೇಡ ಎಂದವು" ಎಂದರು. ಈಗ ನಮಗೆ  ಗುದ್ದಲಿ ಮೋಸದ ಅರಿವಾಯಿತಾದರೂ , ಹುಲ್ಲು ಇದೆಯಲ್ಲ, ಬೆಳೆಯಲಿಎಂದು  ಹೂಲ್ಲಿಗೆ ದಿನಾ,ನೀರು ಹಾಕಿದ್ದೇ ಹಾಕಿದ್ದು. 15 ದಿನದಲ್ಲಿ, ಎಲ್ಲವೂ ಒಣಗಿಹೋಯಿತು.

ಆಗ ನಮಗೆ ಸಂಪೂರ್ಣ ಮೋಸ ತಿಳಿಯಿತು. ಇನ್ನೇನು ಮಾಡಲಾಗದೆ ಸುಮ್ಮನಾದೆವು.
     ಪಾಟು ತಲೆಕೆಳಗಾದರೆ ಟೋಪಿ!


 ಹುಲ್ಲಂತೂ ಆಗಲಿಲ್ಲ, ಆ  ಜಾಗದಲ್ಲಿ ಏನುಮಾಡುವದು?ಈಗ ನಮ್ಮ ಗಮನ, ಪಾಟು ಗಳಗಡೆ ಬಿತ್ತು.ಸರಿ, ಪಾಟುಗಳನ್ನು ಕೊಂದದ್ದಾಯಿತು.


ಎಲ್ಲ ಪಾಟು ಗಳನ್ನೂ ಒಳ್ಳೆಯ ಗಿಡ ಇರುವಂತೆಯೇ ಕೊಂಡು ಜೂಡಿಸಿ ಟ್ಟೆವು. 1000ರೂ ಗಿಂತ ಹೆಚ್ಚಾಗೆ ಖರ್ಚಾಯಿತು. ಸ್ವಲ್ಪ ದಿನಗಳನಂತರ,ಗಿಡಗಳು ಸರಿಯಾಗಿ ಬೆಳೆಯಲಿಲ್ಲ. ಒಣಗಲು ಶುರುವಾಯಿತು. ಇದನ್ನು ಹೊರಗಿನಿಂದಲೇ ಗಮನಿಸಿದ ಯಾರೋ ಒಬ್ಬ," ನನ್ನಬಳಿ, ಗಿಡ ಚೆನ್ನಾಗಿ ಬೆಳೆಯುವ ಆಧುನಿಕ ಗೊಬ್ಬರ ಯಿದೆ. ಹಾಕುತ್ತೇನೆ" ಎಂದ. ನಾವು ಸರಿ ಎನ್ನಲೂ ಕಾಯದೆ, ಸಣ್ಣ ಸಣ್ಣ ಪೊಟ್ಟಣಗಳನ್ನು ಹಾಕಲು ಪ್ರಾರಂಭಿಸಿದ. "ಅದಕ್ಕೆ ಎಷ್ಟಾಗುತ್ತದೆ" ಎನ್ನುವ ಹೊತ್ತಿಗೆ, ಬೇಗ ಬೇಗ 10 ಪೊಟ್ಟಣ ಮುಗಿಸಿದ. "ಸಾಕು ನಿಲ್ಲಿಸು, ಅದಕ್ಕೆ  ಎಷ್ಟು?" ಎಂದು ಗಲಾಟೆ ಮಾಡಿದಾಗ,ಅವನು  ಮೆಲ್ಲನೆ "ಏನಿಲ್ಲ 1 ಪೊಟ್ಟಣಕೆ 100 ರೂ ಅಷ್ಟೇ" ಎಂದ. ನಾವು ದುದ್ದುಕೊಡುವುದಿಲ್ಲವೆಂದಾಗ, ನಿಲ್ಲಿಸಿದ. ಕೊನೆಗೂ ತಕರಾರುಮಾಡಿ, 500ರೂ  ವಸೂಲಿ ಮಾಡಿದ.ಗಿಡಗಳೆಲ್ಲ, ಬಹುಬೇಗ ಒಣಗಿಹೂದವು.
 ಮಾಮೂಲಿನಂತೆ,ನಾನು ನನ್ನ ಹೆಂಡತಿ "ನಿನ್ನಿಂದನೇ ಹೀಗಾಗಿದ್ದು" ಎಂದು ಒಬ್ಬರನ್ನೊಬ್ಬರು ದೂಷಿಸಿಕೊಂಡೆವು.


ಪಾಟೇ  ತಲೆಕೆಳಗಾಗಿ ಟೋಪಿಯಾಯಿತು !